Published
5 months agoon
By
Vanitha Jainಲಂಡನ್, ಡಿಸೆಂಬರ್ 15(ಯು.ಎನ್.ಐ) ಯುನಿಲಿವರ್ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಲೀನಾ ನಾಯರ್ ಅವರನ್ನು ಫ್ರೆಂಚ್ ಐಷಾರಾಮಿ ಬ್ರ್ಯಾಂಡ್ ಶನೆಲ್ ಯೂನಿಲಿವರ್ ಸಿಎಚ್ಆರ್ಒ ಮುಖ್ಯ ಕಾರ್ಯನಿರ್ವಾಹಕರಾಗಿ (ಸಿಇಒ) ಆಗಿ ನೇಮಿಸಿದೆ.
ಯುನಿಲಿವರ್ನಲ್ಲಿ ಜನವರಿಯಲ್ಲಿ ಇವರ ಉದ್ಯೋಗದ ಅವಧಿ ಮಕ್ತಾಯವಾಗಲಿದ್ದು, ಜನವರಿಯಿಂದ ಸಿಎಚ್ಆರ್ಒ ಮುಖ್ಯ ಕಾರ್ಯನಿರ್ವಾಹಕರಾಗಿ ಕಾರ್ಯಾರಂಭಿಸಲಿದ್ದಾರೆ.
ನಾಯರ್ ಅವರು 30 ವರ್ಷಗಳ ಹಿಂದೆ ಹಿಂದೂಸ್ತಾನ್ ಯುನಿಲಿವರ್ ನಲ್ಲಿ ಮ್ಯಾನೇಜ್ಮೆಂಟ್ ಟ್ರೈನಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಹೆಚ್ಯುಎಲ್ನ ಆಡಳಿತ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ ಮೊದಲ ಮಹಿಳೆ ಎಂಬ ಖ್ಯಾತಿಗೂ ಒಳಗಾದರು.
ಯುನಿಲಿವರ್ ಕಂಪೆನಿಯಲ್ಲಿ ಕಾರ್ಖಾನೆಗಳು, ಮಾನವ ಸಂಪನ್ಮೂಲ ಮತ್ತು ಮಾರಾಟ ವಿಭಾಗಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಪ್ರಗತಿ ಸಾಧಿಸಿದರು. ಐಕಾನಿಕ್ ಶನೆಲ್ನ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿರುವುದಕ್ಕೆ ನಾನು ವಿನಮ್ರಳಾಗಿದ್ದೇನೆ. ಶನೆಲ್ನ ಪ್ರಾತಿನಿಧ್ಯತೆಯಿಂದಾಗಿ ಸ್ಫೂರ್ತಿ ಪಡೆದಿದ್ದೇನೆ. ಇದು ಸೃಷ್ಟಿಯ ಸ್ವಾತಂತ್ರ್ಯದಲ್ಲಿ ನಂಬಿಕೆಯಿರುವ, ಮಾನವ ಸಾಮಥ್ರ್ಯವನ್ನು ಬೆಳೆಸುವಲ್ಲಿ ಮತ್ತು ಜಗತ್ತಿನಲ್ಲಿ ಧನಾತ್ಮಕ ಪ್ರಭಾವ ಬೀರುವ ಕಂಪನಿಯಾಗಿದೆ ಎಂದು ಹೇಳಿದ್ದಾರೆ.
ಇನ್ನು ಕಳೆದ 30 ವರ್ಷಗಳಿಂದ ನನ್ನ ಮನೆಯಾಗಿರುವ ಯುನಿಲಿವರ್ನಲ್ಲಿ ಸುದೀರ್ಘವಾಗಿ ವೃತ್ತಿಜೀವನ ಕಳೆದುದಕ್ಕೆ ನಾನು ಕೃತಜ್ಞಳಾಗಿದ್ದೇನೆ. ಈ ಕಂಪೆನಿ ನನಗೆ ಕಲಿಯಲು, ಬೆಳೆಯಲು ಸಂಸ್ಥೆಗೆ ಕೊಡುಗೆಗಳನ್ನು ನೀಡಲು ಅವಕಾಶ ನೀಡಿದೆ. ಯುನಿಲಿವರ್ ಬಗ್ಗೆ ನನಗೆ ಯಾವಾಗಲೂ ಹೆಮ್ಮೆ ಇದೆ ಎಂದು ಹೇಳಿದ್ದಾರೆ ಲಂಡನ್ನಲ್ಲಿ ನಾಯಕತ್ವ ಮತ್ತು ಸಾಂಸ್ಥಿಕ ಅಭಿವೃದ್ಧಿಯ ಮುಖ್ಯಸ್ಥರಾಗಿ ಮೂರು ವರ್ಷಗಳ ನಂತರ, 2016ರಲ್ಲಿ ಸಿಎಚ್ಆರ್ಒ ಆಗಿ ನೇಮಕಗೊಂಡರು.
ಯುನಿಲಿವರ್ ಸಿಇಒ ಅಲನ್ ಜೋಪ್, ಸತತ 30 ವರ್ಷಗಳಿಂದ ಕಂಪೆನಿಗೆ ತಮ್ಮ ಸೇವೆಯ ಮೂಲಕ ಉತ್ತಮ ಕೊಡುಗೆ ನೀಡಿದ ನಿಮಗೆ ನಾ ಆಭಾರಿ. ಅಲ್ಲದೇ ಕಳೆದ ಎರಡು ವರ್ಷಗಳಲ್ಲಿ ಕೋವಿಡ್ನ ಎಲ್ಲಾ ಸವಾಲುಗಳನ್ನು ಎದುರಿಸಲು ಇಡೀ ತಂಡ ಪಣತೊಟ್ಟು ನಿಂತತು ಕಾರ್ಯನಿರ್ವಹಿಸಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ಇನ್ನು ಜಾಗತಿಕವಾಗಿ 50 ಕ್ಕೂ ಹೆಚ್ಚು ದೇಶಗಳಲ್ಲಿ ನಮ್ಮ ಭವಿಷ್ಯದ ಉದ್ಯೋಗದಾತರ ಉದ್ದೇಶ, ಭವಿಷ್ಯಕ್ಕೆ ಸೂಕ್ತವಾದ ಸಂಸ್ಥೆಯನ್ನು ನಿರ್ಮಿಸುವಲ್ಲಿ ನಾಯರ್ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಈ ಹುದೆಯಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.
ಲಂಡನ್: ಕರ್ನಾಟಕದ ಸಾವಿರ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆ
ಶ್ರೀಲಂಕಾದಲ್ಲಿ ಇಂಧನ ಕಳ್ಳ ದಂಧೆಕೋರರ ಮೇಲೆ ದಾಳಿ!
“ಲಡಾಖ್ನಲ್ಲಿ ಉಕ್ರೇನ್ನಂಥ ಪರಿಸ್ಥಿತಿ” – ರಾಹುಲ್ ಗಾಂಧಿ ಲಂಡನ್ನಲ್ಲಿ ಹೇಳಿಕೆ
ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ತೆರವುಗೊಳಿಸಿದ ಸರ್ಕಾರ
ಕೋವಿಡ್ ನೆಗೆಟಿವ್ ಇರುವ 13 ಸಾವಿರ ನಿವಾಸಿಗಳಿಗೆ ಬಲವಂತದ ಕ್ವಾರಂಟೈನ್
ಕಾನ್ ಚಲನಚಿತ್ರೋತ್ಸವ 2022; ರೆಡ್ ಕಾರ್ಪೆಟ್ ಮೇಲೆ ‘ಅತ್ಯಾಚಾರ’ದ ಪ್ರತಿಭಟನೆ!