Published
7 months agoon
By
prathamಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ನಾಗಪುರ ಶಾಸಕರ ಕಛೇರಿಯಲ್ಲಿ ಇಂದು ಮಹಾಲಕ್ಷ್ಮಿ ಎಜುಕೇಷನ್ ಟ್ರಸ್ಟ್ ಹಂಮ್ಮಿಕೊಂಡಿದ್ದ 850 ಗರ್ಭಿಣಿ ಮಹಿಳೆಯರಿಗೆ ಸಾಮೂಹಿಕ ಸೀಮಂತ ಕಾರ್ಯವನ್ನು ಶ್ರೀ ಆದಿ ಚುಂಚನಗಿರಿ ಮಹಾ ಮಠದ
ಶ್ರೀ ಸೋಮಶೇಖರ್ ಸ್ವಾಮಿಜೀ ಉದ್ಘಾಟಿಸಿದರು. ಕಾರ್ಯವನ್ನು ಉದ್ದೇಶಿಸಿ ಮಾತನಾಡಿದ ಸ್ಥಳೀಯ ಶಾಸಕ ಹಾಗು ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ಪ್ರತಿ ಗರ್ಭಿಣಿ ಮಹಿಳೆಗೂ ಸೀಮಂತ ಮಾಡಿಸಿಕೊಂಡು ಮುತ್ತೈದೆ ಯರಿಂದ ಆಶೀರ್ವಾದ ಪಡೆಯುವ ಬಯಕೆ ಇದ್ದೆ ಇರುತ್ತದೆ ಎಂದರು.
ಆರ್ಥಿಕ ಸಮಸ್ಯೆ,ಕೌಟುಂಬಿಕ ಸಮಸ್ಯೆ ಮೊದಲಾದ ತೊಂದರೆಗಳಿಂದ ಒಡಲೊಳಗೆ ತನ್ನ ಕರುಳ ಕುಡಿ ಹೊತ್ತ ತಾಯಿಗೆ ಸೀಮಂತ ಶಾಸ್ತ್ರದ ಆಸೆ ಕಮರಿ ಹೋಗುತ್ತದೆ. ಆದರೆ ತಾಯಂದಿರಾದ ಮಹಿಳೆಯರ ಇಂಥಹ ಆಸೆ ಕಮರಿ ಹೋಗಲು ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ಟ್ ಅವಕಾಶ ಮಾಡಿಕೊಟ್ಟಿಲ್ಲ. ಗರ್ಭಿಣಿ ಮಹಿಳೆಯರ ಸೀಮಂತ ಕಾರ್ಯವನ್ನು ನೆರವೇರಿಸುವ ಮೂಲಕ ಅವರ ಆಸೆಯನ್ನು ಈಡೇರಿಸಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದು ಬಿಬಿಎಂಪಿ ಮಾಜಿ ಉಪಮೇಯರ್ ಹೇಮಲತಾ ಕೆ.ಗೋಪಾಲಯ್ಯ ಮತ್ತು ಶ್ರೀ ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ನ ಪದಾಧಿಕಾರಿಗಳು. ಸತತ 2 ವರ್ಷಗಳಿಂದಲೂ ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆಡೆಸಿಕೊಂಡು ಬರುತ್ತಿರುವ ಹೇಮಲತಾ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸಚಿವರು ಶ್ಲಾಘಿಸಿದರು. ಕಮಲಾನಗರದಲ್ಲಿ ಈ ಭಾಗದ ಮಹಿಳೆಯರನ್ನು ಗಮನದಲ್ಲಿ ಇಟ್ಟುಕೊಂಡು ಬಿ ಬಿ ಎಂ ಪಿ ವತಿಯಿಂದ 40 ಹಾಸಿಗೆಯುಳ್ಳ ಸುಸಜ್ಜಿತವಾದ ಹೆರಿಗೆ ಆಸ್ಪತ್ರೆ ಕಾಮಗಾರಿ ಭರದಿಂದ ಸಾಗುತ್ತಿದ್ದು ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದ ಹೇಮಲತಾ ಕೆ.ಗೋಪಾಲಯ್ಯ ಅವರು, ಕೆಲ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸೀಮಂತ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದನ್ನು ಮನಗಂಡ ನಮ್ಮ ಎಜುಕೇಷನ್ ಟ್ರಸ್ಟ್ ಮತ್ತು ಮಂತ್ರಿಗಳ ಸಹಕಾರದಿಂದ ತುಂಬು ಗರ್ಭಿಣಿಯರಿಗೆ ಕುಂಕುಮದ ಜೊತೆ ಫಲತಾಂಬೂಲ ನೀಡಿ ಶುಭಹಾರೈಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದರು.
ಹೇಮಲತಾ ಕೆ.ಗೋಪಾಲಯ್ಯ ಮತ್ತು ಇತರೆ ಪದಾಧಿಕಾರಿಗಳು ಪ್ರತಿಯೊಬ್ಬ ಗರ್ಭಿಣಿಯರ ಹಣೆಗೆ ಕುಂಕಮ ಇಟ್ಟು, ಕೈ ಗಳಿಗೆ ಹಸಿರು ಬಳೆ ತೊಡಿಸಿ, ಫಲ ತಾಂಬೂಲು ನೀಡಿ ಶುಭಹಾರೈಸಿದರು. ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಗರ್ಭಿಣಿಯರು ಕೊನೆಗೆ ಹೋಳಿಗೆ ಊಟ ಮಾಡಿ ಮುಖದಲ್ಲಿ ಮಂದಹಾಸದೊಂದಿಗೆ ಮನೆಯತ್ತ ತೆರಳಿದರು.
ಈ ಸಂದರ್ಭದಲ್ಲಿ ರಾಜ್ಯ ಒ ಬಿ ಸಿ ಅಧ್ಯಕ್ಷ ನೆಲ ನರೇಂದ್ರ ಬಾಬು ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಉತ್ತರ ಬಿ ಜೆ ಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಜಯರಾಮಯ್ಯ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಲೋಕೇಶ್ ಮಾಜಿ ಪಾಲಿಕೆ ಸದಸ್ಯೆ ಪದ್ಮಾವತಿ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು
ಬಿಡಿಎ ಬಡಾವಣೆ ಮನೆಗಳ ಸಕ್ರಮಕ್ಕೆ ನಿರ್ಧಾರ: ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಪ್ರತಾಪ್ ರೆಡ್ಡಿ ನೇಮಕ
ಡೆಂಘೀ ಪ್ರಕರಣಗಳು ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ
ಶಾಲಾ ಮಕ್ಕಳೊಂದಿಗೆ ಸಿಎಂ ಸಂವಾದ; ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದ ಬೊಮ್ಮಾಯಿ
ಎಂಬಿಎ ಪದವೀಧರೆಯಾಗಿದ್ರೂ ಕೆಲಸ ಸಿಗದೆ ಉಡುಪಿಯ ಸಹನಾ ಸಾವು; ಡಿಕೆಶಿ ಸಂತಾಪ
ರಾಷ್ಟ್ರಗೀತೆ ಹಾಡೋದನ್ನು ಮುತಾಲಿಕ್ ಹೇಳಿ ಕೊಡಬೇಕಾ? – ಜಮೀರ್