Published
6 months agoon
By
Vanitha Jainಥಾಣೆ: ಜನೆವರಿ 07 (ಯು.ಎನ್.ಐ.) ಎಲ್ಗಾರ್ ಪರಿಷದ್ ಪ್ರಕರಣ ಆರೋಪ ಎದುರಿಸುತ್ತಿರುವ ವಕೀಲೆ ಮತ್ತು ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರಿಗೆ ಥಾಣೆಯಲ್ಲಿ ವಾಸಿಸಲು ವಿಚಾರಣಾ ನ್ಯಾಯಾಲಯ ಅನುಮತಿ ನೀಡಲಾಗಿದೆ.
ಭಾರದ್ವಾಜ್ ಅವರ ಸ್ನೇಹಿತ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ ನಂತರ ವಿಶೇಷ ನ್ಯಾಯಾಧೀಶ ದಿನೇಶ್ ಇ ಕೊತಲಿಕರ್ ಅವರು ಗುರುವಾರ ಮುಂಬೈ ಬದಲಿಗೆ ಥಾಣೆಯಲ್ಲಿ ಉಳಿಯಲು ಅನುಮತಿ ಕೋರಿ ಆಕೆಯ ಮನವಿಯನ್ನು ಪುರಸ್ಕರಿಸಿದರು.
ಮುಂಬೈನಲ್ಲಿ ವಸತಿ ದುಬಾರಿಯಾಗಿರುವುದರಿಂದ ಥಾಣೆಯಲ್ಲಿರುವ ಸ್ನೇಹಿತನ ನಿವಾಸಕ್ಕೆ ತೆರಳಲು ಭಾರದ್ವಾಜ್ ಅನುಮತಿ ಕೋರಿದ್ದರು.
ವಿಚಾರಣಾ ನ್ಯಾಯಾಲಯವು ಭಾರದ್ವಾಜ್ಗೆ ವಿಧಿಸಿದ ಜೈಲು ಷರತ್ತುಗಳ ಪ್ರಕಾರ ಮುಂಬೈ ನಗರ ನ್ಯಾಯಾಲಯದ ವ್ಯಾಪ್ತಿಯೊಳಗೆ ವಾಸಿಸಬೇಕೇ ವಿನಃ ಹೊರಗೆ ವಾಸಿಸುವಂತಿಲ್ಲ.
ಜಾಮೀನು ಷರತ್ತುಗಳ ಭಾಗವಾಗಿ ಥಾಣೆಯ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗುವಂತೆ ನ್ಯಾಯಾಲಯ ಆಕೆಗೆ ಸೂಚಿಸಿದೆ. ವಿಳಾಸವನ್ನು ಪರಿಶೀಲಿಸಲು ತನಿಖಾ ಸಂಸ್ಥೆ ಎನ್ಐಎಗೆ ಸ್ವಾತಂತ್ರ್ಯವಿದೆ ಎಂದು ಅದು ಹೇಳಿದೆ.
ಆಭರಣ ಅಂಗಡಿಗೆ ನುಗ್ಗಿ ದರೋಡೆ, ಮಾಲೀಕನಿಗೆ ಗುಂಡೇಟು; ಸಿಸಿಕ್ಯಾಮೆರಾದಲ್ಲಿ ಕೃತ್ಯ ಸೆರೆ
ಸಿಧು ಮೂಸೆವಾಲಾರ ಕೊನೆಯ ಹಾಡನ್ನ ಯೂಟ್ಯೂಬ್ ನಿಂದ ತೆಗೆದುಹಾಕಿರೋದೇಕೆ?
ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ; ತೀಸ್ತಾ ಸೆತಲ್ವಾಡ್ ಪರ ವಿಶ್ವಸಂಸ್ಥೆ ಅಧಿಕಾರಿ ದನಿ
“ರಾಷ್ಟ್ರೀಯ ಭದ್ರತೆಗೆ ಡ್ರಗ್ಸ್ ದೊಡ್ಡ ಸವಾಲು” : ಷಾ
ಸಿಎಂ ಭೇಟಿಯಾಗಲು ಪ್ರವಾಹದ ನೀರಲ್ಲಿ ಪರದಾಡಿದ ಅಸ್ಸಾಂ ಯುವಕ
ಸಿಎಂ ಯೋಗಿ ಆದಿತ್ಯನಾಥ್ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ