Published
6 months agoon
By
UNI Kannadaಹೈದರಬಾದ್:ಜನವರಿ 04, (ಯು.ಎನ್.ಐ.) ಹೈದರಬಾದ್ನಲ್ಲಿರುವ ದೊಡ್ಡ ಚಿತ್ರಮಂದಿಗಳಲ್ಲಿ ಒಂದಾದ ಕೆಬಿಹೆಚ್ ಕಾಲೊನಿಯಲ್ಲಿರುವ ಶಿವಪಾರ್ವತಿ ಚಿತ್ರಮಂದಿರ ಕೂಡ ಒಂದು. ಅತ್ಯಂತ ಪ್ರಾಮುಖ್ಯತೆ ಇರುವ ಚಿತ್ರಮಂದಿರ ಇದಾಗಿದ್ದು ಸೋಮವಾರ ಬೆಳಗ್ಗೆ ಅಗ್ನಿ ಅವಘಡಕ್ಕೀಡಾಗಿತ್ತು. ಶಾರ್ಟ್ ಸರ್ಕಿಟ್ ನಿಂದ ಚಿತ್ರಮಂದಿರ ಬೆಂಕಿಗಾಹುತಿಯಾಗಿದೆ. ಇದರಿಂದಾಗಿ ಚಿತ್ರ ಮಂದಿರದಲ್ಲಿದ್ದ ಪೀಠೋಪಕರಣಗಳ ಜೊತೆಗೆ ಸಿನಿಮಾ ಪರದೇ ಕೂಡ ಪೂರ್ತಿ ಸುಟ್ಟು ಕರಕಲಾಗಿದೆ.
ಈ ವಿಷಯ ತಿಳಿದ ನ್ಯಾಚುರಲ್ ಸ್ಟಾರ್ ನಾನಿ ಭಾವೋದ್ವೇಗಕ್ಕೊಳಗಾಗಿದ್ದಾರೆ. ಚಿತ್ರಮಂದಿರದೊಂದಿಗೆ ತಮಗಿದ್ದ ಅನುಭಂದದ ಬಗ್ಗೆ ನೆನಪುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
‘ಶಿವಪಾರ್ವತಿ ಚಿತ್ರಮಂದಿರದಲ್ಲಿ ಅಗ್ನಿ ಅವಘಡ ಸಂಭವಿಸಿರುವುದು ತುಂಬಾ ನೋವಿನ ಸಂಗತಿ’ ಈ ಚಿತ್ರಮಂದಿರದಲ್ಲಿ ಟಕ್ಕರಿದೊಂಗ ಸಿನಿಮಾ ಮೊದಲ ಷೋ ನೋಡಿರುವುದು ನನಗಿನ್ನೂ ನೆನಪಿನಲ್ಲಿದೆ . ಆ ಸಿನಿಮಾ ಮಂದಿರಕ್ಕೆ ಸ್ನೇಹಿತರೊಂದಿಗೆ ತೆರಳಿದ್ದೂ, ಹೀಗೆ ಎಷ್ಟೋ ಸಿನಿಮಾಗಳನ್ನು ನೋಡಿದ ಈ ಚಿತ್ರಮಂದಿರದ ಬಗ್ಗೆ ನನ್ನ ನೆನಪುಗಳು ತುಂಬಾ ಇದೆ. ಆದರೀಗ ಹೀಗೆ ಬೆಂಕಿಗಾಹುತಿಯಾಗಿರುವ ವಿಷಯ ಕೇಳಿ ತುಂಬಾ ನೋವಾಗುತ್ತಿದೆ . ಅದೃಷ್ಟವಶಾತ್ ಯಾರಿಗೂ ಗಾಯಗಳಾಗದಿರುವುದು ಸಮಾಧಾನ ಎಂದು ಟ್ವೀಟ್ ಮಾಡಿದ್ದಾರೆ.
ಆಭರಣ ಅಂಗಡಿಗೆ ನುಗ್ಗಿ ದರೋಡೆ, ಮಾಲೀಕನಿಗೆ ಗುಂಡೇಟು; ಸಿಸಿಕ್ಯಾಮೆರಾದಲ್ಲಿ ಕೃತ್ಯ ಸೆರೆ
ಸಿಧು ಮೂಸೆವಾಲಾರ ಕೊನೆಯ ಹಾಡನ್ನ ಯೂಟ್ಯೂಬ್ ನಿಂದ ತೆಗೆದುಹಾಕಿರೋದೇಕೆ?
ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ; ತೀಸ್ತಾ ಸೆತಲ್ವಾಡ್ ಪರ ವಿಶ್ವಸಂಸ್ಥೆ ಅಧಿಕಾರಿ ದನಿ
“ರಾಷ್ಟ್ರೀಯ ಭದ್ರತೆಗೆ ಡ್ರಗ್ಸ್ ದೊಡ್ಡ ಸವಾಲು” : ಷಾ
ಸಿಎಂ ಭೇಟಿಯಾಗಲು ಪ್ರವಾಹದ ನೀರಲ್ಲಿ ಪರದಾಡಿದ ಅಸ್ಸಾಂ ಯುವಕ
ಸಿಎಂ ಯೋಗಿ ಆದಿತ್ಯನಾಥ್ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ